HOME

BIO-DATA

ಶ್ರೀ ಮುಖ್ಯಮಂತ್ರಿ ಚಂದ್ರು
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ವಿಧಾನ ಸಭಾ ಕ್ಷೇತ್ರ)
(ಭಾರತೀಯ ಜನತಾ ಪಕ್ಷ)

ಮನೆ ವಿಳಾಸ : ನಂ-93, 3ನೇ ಮುಖ್ಯರಸ್ತೆ, 9ನೇ ಕ್ರಾಸ್, ಜೆ.ಪಿ.ನಗರ, 4ನೇ ಹಂತ, ಡಾಲರ‍್ಸ್ ಕಾಲೋನಿ, ಬೆಂಗಳೂರು-560078.
ಜನ್ಮ ದಿನಾಂಕ : 28ನೇ ಆಗಸ್ಟ್, 1953
ತಂದೆಯ ಹೆಸರು : ಶ್ರೀ ಎನ್. ನರಸಿಂಹಯ್ಯ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಪದ್ಮ
ಮಕ್ಕಳು : ಗಂಡು - 2
ವಿದ್ಯಾರ್ಹತೆ : ಬಿ.ಎಸ್ಸಿ.,
ವೃತ್ತಿ : ಕಲಾವಿದ, ಚಿತ್ರನಟ, ರಂಗ ಕಲಾವಿದ, ಕಿರುತೆರೆಯ ನಟ ಹಾಗೂ ಕೃಷಿಕರು
ಹೊಂದಿರುವ ಸ್ಥಾನಮಾನಗಳು : 1. 2004-2010   ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
2. 13-6-2008 ಅಧ್ಯಕ್ಷರು, ಕನ್ನಡ ಅಭಿವೃದ್ದಿ ಪ್ರಾಧಿಕಾರ
3. 1998-2004  ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
4. 1975-1985  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಡಳಿತ ಅನುಭವ
5. 1985-1990  ಸದಸ್ಯರು, ಕರ್ನಾಟಕ ವಿಧಾನ ಸಭೆ
6. 2000            ಉಪಾಧ್ಯಕ್ಷರು, ಭಾರತೀಯ ಜನತಾ ಪಕ್ಷ
7. 1995-96 & 99  ಸದಸ್ಯರು, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ದಿ ಸಮಿತಿ
8. 1998-99   ಸದಸ್ಯರು, ಹಕ್ಕುಬಾಧ್ಯತಾ ಸಮಿತಿ
9. 1987-89    ಸದಸ್ಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿ
10. 1988    ಪ್ಯಾರಿಸ್ ನಲ್ಲಿ ನಡೆದ ವಿಶ್ವ ಶಾಂತಿ ಸಮ್ಮೇಳನದ ಪ್ರತಿನಿಧಿ
11. 1987  ಲಂಡನ್ ನ ಮ್ಯಾಂಚೆಸ್ಟರ‍್ ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ಹವ್ಯಾಸಗಳು : ಕ್ರೀಡೆ, ಪ್ರವಾಸ, ಓದುವುದು, ಕಥೆ ಮತ್ತು ಕವನ ಬರೆಯುವುದು ಯೋಗ, ಮೂಕಾಭಿನಯ
ಸಾಮಾಜಿಕ ಮತ್ತು ಇತರೆ ಚಟುವಟಿಕೆಗಳು : ಜೀವನದ ಎಲ್ಲಾ ಸ್ಥರಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ನಿರ್ಮೂಲನೆ, ಮಾನವನ ಹಕ್ಕುಗಳ ಸಂರಕ್ಷಣೆ, ಜನಜಾಗೃತಿ ಮೂಡಿಸುವುದು ಮತ್ತು ನಮ್ಮ ವ್ಯವಸ್ಥೆಯಲ್ಲಿನ ದುರಾಡಳಿತವನ್ನು ಕೊನೆಗೊಳಿಸುವ ಸಲುವಾಗಿ ‘ಸಂಕಲ್ಪ ಯಾತ್ರೆ’ ಕಾರ್ಯಕ್ರಮದಡಿ ಸಂಘಟನೆ ಮತ್ತು ಹೋರಾಟ ಹಾಗೂ ಈ ಎಲ್ಲಾ ಅಂಶಗಳ ಬಗ್ಗೆ ಗ್ರಾಮೀಣ ಜನತೆಯಲ್ಲಿ ಅರಿವು ಮೂಡಿಸುವುದು ಮತ್ತು ಅವರನ್ನು ಹೆಚ್ಚು ಜಾಗೃತರನ್ನಾಗಿಸುವುದಲ್ಲದೆ ಯುವಕರಲ್ಲಿ ಅವರ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಾಕಷ್ಟು ತಿಳುವಳಿಕೆ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ಮಿಸುವುದು.
    ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೇವೆಗೆ ನೆರವಾಗುವ ನಿಟ್ಟಿನಲ್ಲಿ ‘ಕಾರ್ಗಿಲ್ ನಿಧಿ’ ಸಂಗ್ರಹಿಸುವ ಜವಾಬ್ದಾರಿಯನ್ನು ಹೊತ್ತಿರುವುದು ಮತ್ತು ರಾಜಕೀಯ ಹಾಗೂ ಸಿನಿಮಾ ರಂಗಗಳಿಂದ ನಿಧಿ ಸಂಗ್ರಹಿಸಿ ಸಲ್ಲಿಸಿರುವುದು.
ಸೆರೆವಾಸ
  1. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಮಾನವೀಯ ಕಾರಣಗಳಿಗಾಗಿ ಪ್ರತಿಭಟನೆ ನಡೆಸಿರುವುದ್ದಕ್ಕಾಗಿ.
  2. ಸರ್ವಾಧಿಕಾರ ಹಾಗು ವಂಶಪಾರಂಪರ‍್ಯ ಆಳ್ವಿಕೆ ವಿರುದ್ದ ಪ್ರತಿಪಾದಿಸಿದ್ದಕ್ಕಾಗಿ.
  3. ವಿದ್ಯುತ್, ಬಸ್ಸು, ರೈಲು ದರ ಮತ್ತು ರಸಗೊಬ್ಬರಗಳ ಬೆಲೆ ಕಡಿತಕ್ಕಾಗಿ ಒತ್ತಾಹಿಸುವಂತಹ ಜನಹಿತ ಹೋರಾಟಗಳಲ್ಲಿ ಭಾಗವಹಿಸದ್ದಕ್ಕಾಗಿ ಮತ್ತು ಖಾಸಗಿ  ಶಿಕ್ಷಣ ಸಂಸ್ಥೆಗಳು ವಸೂಲು ಮಾಡುತ್ತಿರುವ ಹೆಚ್ಚಿನ ವಂತಿಗೆಯನ್ನು ವಿರೋಧಿಸಿ ಹೋರಾಟ ಮಾಡಿದ್ದಕ್ಕಾಗಿ.

ರಂಗಕಲೆ   ನಾಟಕದ ಗೀಳು ಹಾಗೂ 12ವರ್ಷದ ಬಾಲಕನಾಗಿದ್ದಾಗ ಶಾಲಾ ದಿನಗಳಲ್ಲೆ ನಾಟಕದಲ್ಲಿ ಭಾಗವಹಿಸುವ ಆಸಕ್ತಿ.  1970ರಿಂದಲೆ ಕನ್ನಡದ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು.
ನಟನಾಗಿ, ನಿರ್ದೇಶಕನಾಗಿ, ತಂತ್ರಜ್ಞನಾಗಿ, ಸಂಘಟಕನಾಗಿ ಹಾಗೂ ಶ್ರೇಷ್ಠ ಮೂಕಾಭಿನಯ ಕಲಾವಿದನಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವುದು.
ಶ್ರೀ ಬಿ. ವಿ. ಕಾರಂತ, ಡಾ. ಹೆಚ್. ಎನ್. ರಂಗನಾಥ, ಪ್ರೊ. ಬಿ. ಕೆ. ಚಂದ್ರಶೇಖರ್,‍ಶ್ರೀ ಮೇಕಪ್ ನಾಣಿ, ಶ್ರೀಮತಿ ಪ್ರೇಮಾಕಾರಂತ, ಶ್ರೀ ಪ್ರಸನ್ನ, ಶ್ರೀ ಆರ್.ನಾಗೇಶ್, ಶ್ರೀ ಟಿ. ಎನ್. ಸೀತಾರಾಮ್, ಶ್ರೀಮತಿ ಬಿ. ಜಯಶ್ರೀ, ಶ್ರೀ ವಿ. ರಾಮಮೂರ್ತಿ, ಶ್ರೀ ಟಿ. ಎನ್. ನರಸಿಂಹನ್, ಶ್ರೀ ಬಿ. ವಿ.ರಾಜಾರಾಮ್, ಶ್ರೀಮತಿ ಆರ್‌.ಡಿ.ರಮಾ, ಶ್ರೀ ಸಿ. ಕೃಷ್ಣಸ್ವಾಮಿ ಮುಂತಾದ ಪ್ರಸಿದ್ದ ರಂಗ ನಿರ್ದೇಶಕರೊಡನೆ ಕೆಲಸ ಮಾಡಿದ ಅನುಭವ.

ನಾಟಕಗಳ ನಿರ್ದೇಶನ:- ಹದಿನೈದಕ್ಕಿಂತ ಹೆಚ್ಚಿನ ಸಂಖ್ಯೆಯ ನಾಟಕಗಳಿಗೆ ನಿರ್ದೇಶನ ಮಾಡಿರುವ ಅನುಭವ.
ಪ್ರಮುಕ ನಾಟಕಗಳು;-

  1. ಮುಖ್ಯಮಂತ್ರಿ (ರಾಜಕೀಯ ನಾಟಕ)
  2. ಅಚಲಯಾತ್ರಾ (ಶೈಕ್ಷಣಿಕ ಮೌಲ್ಯಗಳ ಸಂದೇಶವಿರುವ ನಾಟಕ)
  3. ಮೋಡಗಳು (ಗ್ರೀಡ್ ನಾಟಕ)
  4. ಮೂಕಿ ಟಾಕಿ (ಮೂಕಾಭಿನಯ ಪ್ರದರ್ಶನ)
  5. ಎಲ್ಲರೂ ಮಾಡುವುದು (ರಾಜಕೀಯ ನಾಟಕ)
  6. ಗರ್ಭಗುಡಿ (ಮೂಢನಂಬಿಕೆಗಳ ಮೇಲಿನ ನಾಟಕ೦
  7. ಭರತಪ್ಪನ ಸೊಂಟಕ್ಕೆ ಗಂಟೆ (ಜಾನಪದ ನಾಟಕ)
  8. ಕೇಳು ಜನಮೇಜಯ (ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಒಮದು ಒಂದು ನಾಟಕ)
  9. ಕಂಬಳಿ ಸೇವೆ (ನಗೆ ನಾಟಕ)
  10. ಹೋಂರೂಲ್ (ಸಾಮಾಜಿಕ ನಾಟಕ) ಮುಂತಾದವುಗಳು…

ನಟನೆ:- ಭಾರತದ ಬೇರೆ ಬೇರೆ ನಗರಗಳಲ್ಲಿ, ಜಿಲ್ಲೆಗಳಲ್ಲಿ ಮತ್ತು ಪ್ರಮುಖ ಪಟ್ಟಣಗಳಲ್ಲಿ ಸುಮಾರು ನೂರು ನಾಟಕಗಳ 3000 ಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನು ನೀಡಿರುತ್ತಾರೆ.  ವಿದೇಶಗಳಲ್ಲೂ ಸಹ ಹಲವಾರು ಪ್ರದರ್ಶಗಳನ್ನು ನೀಡಿರುತ್ತಾರೆ.

  1. ಶ್ರೀ ಜೊಗೇಶ್ ದತ್ತ ಅವರಲ್ಲಿ ಕೊಲ್ಕತ್ತಾದ ಮೈಮ್ ಇನ್ ಸ್ಪಿಟ್ಯೂಟ್ ನಲ್ಲಿ ಮೂಕಾಭಿನಯ ಪ್ರದರ್ಶನದ ತರಬೇತಿ ಪಡೆದು, ಪ್ರದರ್ಶನ ನೀಡಿರುತ್ತಾರೆ.
  2. ಅಮೇರಿಕಾದ ಅಡ್ಯಮ್ ಅಬ್ರಾಹಂ ಅವರಲ್ಲಿ ಮೂಕಾಭಿನಯ ತರಬೇತಿ ಪಡೆದುಕೊಂಡಿರುತ್ತಾರೆ.
  3. ಕರ್ನಾಟಕ ಪ್ರಸಿದ್ದ ನಿರ್ದೇಶಕರಾದ ಶ್ರೀ ವಿ. ರಾಮೂರ್ತಿ ಅವರಲ್ಲಿ ಕಲಿಕಾ ತಬೇತಿ ಪಡೆದುಕೊಮಡು ಅವರು ನಿರ್ದೇಶಿಸಿದ ಪೂರ್ಣಕಾಲಿಕ ಮೂಕಾಭಿನಯ ಪ್ರದರ್ಶನದಲ್ಲಿ ಪ್ರಮುಖ ಅಭಿನಯನ ನೀಡಲಾಗಿದೆ.
  4. ರಂಗಭೂಮಿ ಕಾರ್ಯಾಗಾರ ಮತ್ತು ಮೂಕಾಭಿನಯ ಕಾರ್ಯಾಗಾರದಲ್ಲಿ ಭಾಗವಹಿಸಿ ಹೆಚ್ಚಿನ ಜ್ಷಾನ ಹಾಗೂ ತರಬೇತಿ ಪಡೆದುಕೊಂಡಿರುತ್ತಾರೆ.  ಭಾರತದ ಪ್ರಮುಖ ನಗರಗಳಲ್ಲಿ ಮೂಕಾಭಿನಯ ಪ್ರದರ್ಶನಗಳನ್ನು ನೀಡಿರುತ್ತಾರೆ.

   ವಿದೇಶಗಳಲ್ಲಿ ಮೂಕಾಭಿನಯ ಪ್ರದರ್ಶನ: 1987 ರಿಂದ  1989ರ ಅವಧಿಯಲ್ಲಿ ಲಂಡನ್, ಪ್ಯಾರೀಸ್, ರೋಮ್, ಸ್ವಿಡ್ಜರ್‌ ಲ್ಯಾಂಡ್, ಆಮ್ ಸ್ಟರ್‌ಡಮ್, ಬೆಲ್ಜಿಯಂ, ಸಿಂಗಪುರ, ಹಾಂಗ್ ಕಾಂಗ್ ಮತ್ತು ಮಲೇಶಿಯಾಗಳಲ್ಲಿ ಪ್ರದರ್ಶನಗಳನ್ನು ನೀಡಿರುತ್ತಾರೆ.

ಪ್ರಶಸ್ತಿ ಸನ್ಮಾನಗಳು:- ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ‘ಅಚಲಯಾತ್ರೆ’ನಾಟಕ ನಿರ್ದೇಶನ ಮಾಡಿದ್ದಕ್ಕಾಗಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ:
1999ರಲ್ಲಿ ಕರ್ನಟಕ ನಾಟಕ ಅಕಾಡೆಮಿಯಿಂದ, ಅತ್ಯುತ್ತಮ ನಟನೆ ಮತ್ತು ರಂಗ ಪ್ರದರ್ಶನಕ್ಕಾಗಿ ರಾಜ್ಯ ಮಟ್ಟದ ಪ್ರಶಸ್ತಿ:-
ಅತ್ಯುತ್ತಮ ನಟನೆಗಾಗಿ, ನಿರ್ದೇಶನಕ್ಕಾಗಿ ಮತ್ತು ಅಣಕು ಪ್ರದರ್ಶಕ್ಕಾಗಿ ನೂರಾರು  ಸಂಘ-ಸಂಸ್ಥೆಗಳಿಮದ ಪ್ರಶಸ್ತಿಗಳನ್ನು ಮತ್ತು ಸನ್ಮಾನಗಳನ್ನು ಸ್ವೀಕರಿಸಿರುತ್ತಾರೆ.
ವಿಶೇಷ ನಾಟಕ ಪ್ರದರ್ಶನ, ವಾರಾಂತ್ಯದ ನಾಟಕ ಪ್ರದರ್ಶನಕ್ಕಾಗಿ ನಾಟಕ ಅಭಿನಯ ಕಲೆ, ರಂಗತಾಲೀಮು ಮತ್ತು ಇತರ ರಂಗಭೂಮಿ ಚಟುವಟಿಕೆಗಳನ್ನು ಸಂಘಟಿಸುವುದು ಮತ್ತು ಅದರಲ್ಲಿ ಅನುಭವ.

ಪ್ರದರ್ಶಿಸಲಾದ ಪ್ರಮುಖ ನಾಟಕಗಳು:-

  1. ‘ಮುಖ್ಯಮಂತ್ರಿ’ ನಾಟಕದಲ್ಲಿ ಪ್ರಮುಖ ಪಾತ್ರವಾದ ಮುಖ್ಯಮಂತ್ರಿ ಪಾತ್ರವನ್ನು (ಸುಮಾರು 300ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು) ಯಶಸ್ವಿಯಾಗಿ ಅಭಿನಯಿಸಿದಕ್ಕಾಗಿ‘ಮುಖ್ಯಮಂತ್ರಿ ಚಂದ್ರು’ ಎಂಬ ಹೆಸರು ಜನಪ್ರಿಯವಾಯಿತು.
  2. ಪ್ರಸನ್ನ ಅವರು ನಿರ್ದೇಶಿಸಿದ ಮ್ಯಾಕ್ಸಿಂಗಾರ್ಕಿ ಅವರ ತಾಯಿ ನಾಟಕ.
  3. ಡಾ. ಡಿ. ಆರ್.‍ ನಾಗರಾಜ್‌ ಅವರು ರಚಿಸಿದ ‘ಕತ್ತಲದಾರಿ ದೂರ’ ನಾಟಕ(ವಾರ್ಡ್ ನಂ.6 ಆಧಾರಿತ) ನಿರ್ದೇಶನ: ಟಿ.ಎನ್.ನರಸಿಂಹನ್.
  4. ಮತಿಗಟ್ಟ ಕೃಷ್ಣಮೂರ್ತಿ ಅವರು ರಚಿಸಿದ ‘ಭರತಪ್ಪನ ಸೊಂಟಕ್ಕೆ ಗಂಟೆ’ ಎಂಬ ಜಾನಪದ ನಾಟಕ.
  5. ಬಿ. ಜಯಶ್ರೀ ಅವರು ನಿರ್ದೇಶಿಸಿದ ಹಾಗೂ ವಿಜಯ ತೆಂಡೂಲ್ಕರ್‍ ಅವರು ರಚಿಸಿದ ‘ಘಾಶೀರಾಮ್ ಕ್ವತ್ವಾಲ್’ ನಾಟಕ.
  6. ಆಲ್ಬರ್ಟ್ ಕಾಮುವಿನ ಪ್ರೊ.ಬಿ. ಚಂದ್ರಶೇಖರ್‍್ಅವರು ನಿರ್ದೇಶಿಸಿದ ‘ಕಾಲಿಗುಲ’ ನಾಟಕ.
  7. ಪ್ರಸನ್ನ ಅವರು ನಿರ್ದೇಶಿಸಿದ ಗೆಲಿಲಿಯೋ ನಾಟಕ.
  8. ಶ್ರೀ ಟಿ.ಎನ್. ಸೀತಾರಾಮ್ ಅವರು ರಚಿಸಿ ನಿರ್ದೇಶಿಸಿದ ಅವರು ರಚಿಸಿ ನಿರ್ದೇಶಿಸಿದ ‘ನಮ್ಮೊಳಗೊಬ್ವ ನಾಜೂಕಯ್ಯ’ ನಾಟಕ.
  9. ಆರ್‌ ನಾಗೇಶ್‌ ಅವರು ನಿರ್ದೇಶಿಸಿದ ‘ಆಸ್ಟೋಟ’ ಮತ್ತು ‘ತಬರನ ಕಥೆ’. ಚಲನಚಿತ್ರ ಕ್ಷೇತ್ರ 350ಕ್ಕಿಂತ ಹೆಚ್ಚಿನ ಚಲನಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿರುತ್ತಾರೆ.

ಪ್ರಮುಖ ಚಲನಚಿತ್ರಗಳು  
1. ಚಕ್ರವ್ಯೂಹ
2. ಪಣಿಯಮ್ಮ
3. ಬೆಂಕಿ
4. ಚದುರಂಗ
5. ಬೀಗರ ಪಂದ್ಯ
6. ಗೋಲ್ ಮಾಲ್ ರಾಧಾಕೃಷ್ಣ
7. ಗಣೇಶನ ಮದುವೆ
8. ಜನುಮದ ಜೋಡಿ
9. ಸೂರ್ಯವಂಶ
10. ಶಬ್ದವೇದಿ. ಮುಂತಾದ ನೂರಾರು ಚಿತ್ರಗಳು

ಕಿರುತೆರೆಯಲ್ಲಿ:- ನೂರಾರು ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿರುವುದು ಮತ್ತು ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯ ದೈನಿಕ ಧಾರಾವಾಹಿಗಳಲ್ಲಿ ನಟಿಸಿರುತ್ತಾರೆ.
ಅಪೇಕ್ಷೆ; ರಾಜಕೀಯ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಪಡೆದುಕೊಂಡ ಅನುಭವ ಮತ್ತು ಜ್ಞಾನವನ್ನು ಸಮುದಾಯದ ಸೇವೆಗಾಗಿ ಸದಾ ಮುಡುಪಿಡಲು ಸಿದ್ದರಿದ್ದಾರೆ.