HOME

BIO-DATA

ಡಾ|| ಚಂದ್ರಶೇಖರ್ ಬ. ಕಂಬಾರ‍
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ನಾಮನಿರ್ದೇಶನ ಹೊಂದಿದವರು)
(ಭಾ.ರಾ.ಕಾ )

ಮನೆ ವಿಳಾಸ : ಗೋದಗೇರಿ ಅಂಚೆ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ- 591251
ಈಗಿನ ವಿಳಾಸ : ಸಿರಿ ಸಂಪಿಗೆ ನಂ:44, ಮೊದಲನೇ ಮುಖ್ಯರಸ್ತೆ, 4ನೇ ಬ್ಲಾಕ್‌ ಬನಶಂಕರಿ 3ನೇ ಹಂತ, ಬೆಂಗಳೂರು-560085.
ಜನ್ಮ ದಿನಾಂಕ : 2ನೇ ಜನವರಿ 1937
ಜನ್ಮ ಸ್ಥಳ : ಗೋದಗೇರಿ
ತಂದೆಯ ಹೆಸರು : ಶ್ರೀ ಬಸವಣ್ಣ ಆರ್‌ ಕಂಬಾರ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಸತ್ಯಭಾಮ ಸಿ. ಕಂಬಾರ್‍
ಮಕ್ಕಳು : ಗಂಡು-1, ಹೆಣ್ಣು-3
ವಿದ್ಯಾರ್ಹತೆ : ಎಂ.ಎ.,  ಪಿ.ಹೆಚ್.ಡಿ
ವೃತ್ತಿ : ನಿವೃತ್ತ ಉಪ ಕುಲಪತಿಗಳು(ಪ್ರಾಧ್ಯಾಪಕರು)
ಮೊಬೈಲ್‌ : 94483-80824
ಹೊಂದಿರುವ ಸ್ಥಾನಮಾನಗಳು : 2004-2010 ಸದಸ್ಯರು, ವಿಧಾನ ಪರಿಷತ್ತು
1991-1998: ಸಂಸ್ಥಾಪಕ-ಉಪ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ
1983-1987: ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ
1986: ಉಪಾಧ್ಯಕ್ಷರು, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೊಸೈಟಿ, ನವದೆಹಲಿ
1996-2000: ಅಧ್ಯಕ್ಷರು, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೊಸೈಟಿ, ನವದೆಹಲಿ
1980-1983: ಸದಸ್ಯರು, ಕರ್ನಾಟಕ ನಾಟಕ ಅಕಾಡೆಮಿ
1980-1983: ಸದಸ್ಯರು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
1987-1991: ಸದಸ್ಯರು, ‘ರಂಗಾಯಣ’ ಕರ್ನಾಟಕ ನಾಟಕ ಕೃತಿಗಳ ಸಂಗ್ರಹಾಲಯ, ಮೈಸೂರು
1988: ಸದಸ್ಯರು, ಸಾಹಿತ್ಯ ಅಕಾಡೆಮಿ, ನವದೆಹಲಿ
1992 ರಿಂದ 1998: ಸದಸ್ಯರು, ಸಂಗೀತ ನಾಟಕ ಅಕಾಡೆಮಿ ನವದೆಹಲಿ

ಕಾರ್ಯಕಾರಿ: ಸಾಹಿತ್ಯ ಅಕಾಡೆಮಿ, ನವದೆಹಲಿ, (1992 ರಿಂದ 1998),
ಸದಸ್ಯರು:- ಸಂಗೀತ ನಾಟಕ ಅಕಾಡೆಮಿ, ನವದೆಹಲಿ, (1992 ರಿಂದ 1998)
ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೊಸೈಟಿ,, ನವದೆಹಲಿ, (1995 ರಿಂದ 1996, ರಂಗತಜ್ಞರ ಸಮಿತಿ, ಕೇಂದ್ರ ಸರ್ಕಾರ, (1995), ರಂಗತಜ್ಞರ ಸಮಿತಿ ಪೋರ್ಡ್ ಫೌಂಡೇಷನ್‌ ಸಂಗೀತ ನಾಟಕ ಅಕಾಡೆಮಿ ನವದೆಹಲಿ(1998) ಭಾರತ್ ಭವನ್, ಭೂಪಾಲ್

ಡಾ. ಚಂದ್ರಶೇಖರ ಬ. ಕಂಬಾರ ಕನ್ನಡದ ಒಬ್ಬ ಪ್ರಮುಖ ಕವಿ, ನಾಟಕಕಾರ ಹಾಗೂ ಜಾನಪದ ತಜ್ಞ.  ಇವರು ಜಾನಪದ, ನಾಟಕ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಪಟ್ಟ 21 ನಾಟಕಗಳು, 8 ಕವನ ಸಂಕಲನಗಳು, 3 ಕಾದಂಬರಿಗಳು ಮತ್ತು 12 ಸಂಶೋಧನಾ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಚಕೋರಿ ಎಂಬ ಮಹಾಕಾವ್ಯವನ್ನೂ ಸಹ ಪ್ರಕಟಿಸಿದ್ದಾರೆ.   ಚಿಕಾಗೋ ವಿಶ್ವವಿದ್ಯಾನಿಲಯ, ನ್ಯೂಯರ್ಕ್ ನ ಅಮೆರಿಕನ್ ಓರಿಯಂಟಲ್ ಸೆಂಟರ್,‍ ಬರ್ಲಿನ್‌(ಜೆ.ಡಿ.ಆರ್‌ ನಲ್ಲಿರುವ ಅಂತರಾಷ್ಟ್ರಿಯ ರಂಗ ಸಂಸ್ಥೆ, ಮಾಸ್ಕೊ(ಯು.ಎಸ್.ಎಸ್.ಆರ್),‍ಜೇಡ್, ಅಕಿತಾ,ಜಪಾನ್, ಬಹಳಷ್ಟು ಭಾರತೀಯ ವಿಶ್ವವಿದ್ಯಾನಿಲಯಗಳು, ಸಾಹಿತ್ಯ ಅಕಾಡೆಮಿ, ಸಂಗೀತ ನಾಟಕ ಅಕಾಡೆಮಿ, ನವದೆಹಲಿ ಮತ್ತು ಇತರ ಸಂಸ್ಥೆಗಳು-ಇಲ್ಲೆಲ್ಲಾ ಇವರು ಭಾರತೀಯ ಜಾನಪದ  ಮತ್ತು ರಂಗಕಲೆಗೆ ಸಂಬಂಧಪಟ್ಟ ಪ್ರಬಂಧಗಳನ್ನು ಮಂಡಿಸಿದ್ದಾರೆ.  ಭರೆದ ಬರಹಗಾರರ ನಿಯೋಗದ ಸದಸ್ಯರರಾಗಿ ಚೀನಾ ದೇಶಕ್ಕೆ ಭೇಟಿ ನೀಡಿದ್ದಾರೆ.  ಫ್ರಾನ್ಸ್ ನಲ್ಲಿ 1998ರಲ್ಲಿ ನಡೆದ ಬೀದಿ ನಾಟಕೋತ್ಸವವನ್ನು ವಿಕ್ಷಿಸಲು ಫ್ರೆಂಚ್ ಸರ್ಕಾರ ಇವರನ್ನು ಆಹ್ವಾನಿಸಿತ್ತು.  1984ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ‘ಕನ್ನಡ ಜಾನಪದ ವಿಶ್ವಕೋಶ’ವನ್ನು ಸಂಪಾದಿಸಿದ್ದರು.  ಇವರ ನಾಟಕಗಳು ಬಹಳಷ್ಟು ಭಾಷೆಗೆ ಅನುವಾದಗೊಂಡು ಪ್ರದರ್ಶಿತಗೊಂಡಿವೆ ಮತ್ತು ಇವರ ನಾಟಕಗಳು ಆಂಗ್ಲ ಭಾಷೆಯಲ್ಲಿ ಸೀಗಲ್ ಬುಕ್ಸ್, ಕಲ್ಕತ್ತಾ, ಇವರಿಂದ ಪ್ರಕಟಿತವಾಗಿವೆ.  ಇವರ ಮಹಾಕಾವ್ಯ ಆಂಗ್ಲ ಭಾಷೆಗೆ ಅನುವಾದಗೊಂಡು ಅದನ್ನು ಪೆಂಗ್ವಿನ್ ಬುಕ್ಸ್-ಇವರು ಪ್ರಕಟಿಸಿದ್ದಾರೆ.  ಖ್ಯಾತ ನಿರ್ದೇಶಕರು, ದೇಶದ ವಿವಿಧ ಕೇಂದ್ರಗಳಲ್ಲಿ ಇವರ ನಾಟಕಗಳನ್ನು  ನಿರ್ದೇಶಿಸಿದ್ದಾರೆ.  1993ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ರಾಜ್ಯ ಮಟ್ಟದ ನಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿರುತ್ತಾರೆ.  1985 ಮತ್ತು 1996ರ ವಿಶ್ವಕಾವೋತ್ಸವದಲ್ಲಿ ಭಾಗವಹಿಸಿರುತ್ತಾರೆ.

ಪ್ರಶಸ್ತಿಗಳು ಮತ್ತು ಗೌರವಗಳು : ಇವರ ಐದು ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.  ಇವರ ಸುಪ್ರಸಿದ್ಧ ನಾಟಕವಾದ ‘ಜೋಕುಮಾರಸ್ವಾಮಿ; 1975ರಲ್ಲಿ ವರ್ಷದ ಅತ್ಯುತ್ತಮ ನಾಟಕವೆಂದು ಬಿರುದಾಂಕಿತಗೊಂಡು ‘ನಾಟ್ಯ ಸಂಘ’ ನೀಡುವ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಪಡೆದುಕೊಂಡಿದೆ.  ಇವರ ಮತ್ತೊಂದು ನಾಟಕ ‘ಜೈಸಿದನಾಯಕ’ ಕರ್ನಾಟಕದಲ್ಲಿ1975ನೇ ವರ್ಷದ ಅತ್ಯುತ್ತಮ ಪುಸ್ತಕವೆಂಬ ಕೀರ್ತಿಗೆ ಪಾತ್ರವಾಗಿ ‘ವರ್ಧಮಾನ ಪ್ರಶಸ್ತಿಯನ್ನು ಪಡೆದುಕೊಂಡಿದೆ.  ಇವರ ಸಾವಿರದ ನೆರಳು’ ಕೃತಿ 1982ರಲ್ಲಿ ಅತ್ಯುತ್ತಮ ಕವನ ಸಂಕಲನವೆಂಬ ಕಾರಣಕ್ಕಾಗಿ ಕೇರಳ ಸರ್ಕಾರದಿಂದ ‘ಆಶನ್ ಅವಾರ್ರ್ಡ’ ಪಡೆದುಕೊಂಡಿದೆ.  ನಾಟಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅವರು ಕೆ.ವಿ.ಶಂಕರೇಗೌಡ ಪ್ರಶಸ್ತಿಯನ್ನು 1990ರಲ್ಲಿ ಪಡೆದುಕೊಂಡಿದ್ದಾರೆ.  ನಾಟಕ ರಚನೆಗಾಗಿ 1983ರಲ್ಲಿ ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಇವರು ಪಡೆದುಕೊಂಡಿದ್ದಾರೆ ಮತ್ತು ಸಿರಿಸಂಪಿಗೆ ನಾಟಕ್ಕೆ 1991ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ (ನವದೆಹಲಿ) ಪ್ರಶಸ್ತಿ ಲಭಿಸಿದೆ.

ಅಭಿನಂದನೆಗಳು:
1. ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರ ಮಹೋತ್ಸವ ಸಮಾರಂಭ - 1975
2. ನಂದಿಕಾರ್,ಕಲ್ಕತ್ತಾ - 1987                                                    
3. ಕರ್ನಾಟಕ ನಾಟಕ ಅಕಾಡೆಮಿ - 1987                                      
4. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ - 1988                     
5. ಕರ್ನಾಟಕ ಸಾಹಿತ್ಯ ಅಕಾಡೆಮಿ - 1989                   
6. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (ನವದೆಹಲಿ) - 1983
7. ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ನವದೆಹಲಿ)- ‘’ಸಿರಿಸಂಪಿಗೆ’’ ಕೃತಿಗಾಗಿ - 1991
8. ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ - 1993             
9. ಮಾಸ್ತಿ ಪ್ರಶಸ್ತಿ - 1997                                                                  
10. ಪದ್ಮಶ್ರೀ ಪ್ರಶಸ್ತಿ - 2001                                                          
11. ಕಬೀರ್‌ ಸಮ್ಮಾನ್ ಪ್ರಶಸ್ತಿ - 2002                                         
12. ಪಂಪ ಪ್ರಶಸ್ತಿ - 2003                                                            

            ಇವರು ಐದು ಚಲನಚಿತ್ರಗಳನ್ನು ಹಾಗೂ ಬಹಳಷ್ಟು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ.  ಆರು ಚಲನಚಿತ್ರಗಳಿಗೆ, ಬಹಳಷ್ಟು ಸಾಕ್ಷ್ಯಚಿತ್ರಗಳಿಗೆ ಹಾಗೂ ದೂರದರ್ಶನದ ಧಾರಾವಾಹಿಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.  ಇವರ ‘ಕಾಡು ಕುದುರೆ’ 1987ರಲ್ಲಿ ಭಾರತೀಯ ಪನೋರಮ’ ಗೆ ಪ್ರವೇಶ ಪಡೆದು ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿಕೊಂಡಿದೆ.  ಅವರ ಚಲನಚಿತ್ರ ‘’ಸಂಗೀತ’’ 1981ರಲ್ಲಿ ರಾಜ್ಯಮಟ್ಟದ 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ ಮತ್ತು ಇವರು ಕೆಳಕಂಡ ಪ್ರಶಸ್ತಿಗಳನ್ನೂ ಸಹ ಪಡೆದುಕೊಂಡಿದ್ದಾರೆ.

  1. ಅತ್ಯುತ್ತಮ ಕಥೆಗಾರ
  2. ಅತ್ಯುತ್ತಮ ಸಂಭಾಷಣೆ ಬರಹಗಾರ
  3. ಅತ್ಯುತ್ತಮ ಸಂಗೀತ ನಿರ್ದೇಶಕ
  4. 3ನೇ ಅತ್ಯುತ್ತಮ ಚಲನಚಿತ್ರದ ಅತ್ಯುತ್ತಮ ನಿರ್ದೇಶಕ

     ಇವರು 1968-69ನೇಸಾಲಿನಲ್ಲಿ ಅತ್ಯಂತ ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿಯಾಗಿದ್ದರು.  1984-86ನೇ ಸಾಲಿನಲ್ಲಿ ಸಾಂಪ್ರದಾಯಿಕ/ಜಾನಪದ ಕಲೆಗಳು ಹಾಗೂ ಆಧುನಿಕ ನಾಟಕಗಳು ನಡುವಿನ ಸಂಬಂಧಾಂತರಗಳನ್ನು ಕುರಿತು ವಿಷಯ ಮಂಡನೆಗಾಗಿ ಫೋರ್ಡ್ ಫೆಲೋಶಿಫ್ ಪಡೆದುಕೊಂಡಿದ್ದಾರೆ.

ಇವರ ಪ್ರಕಟಿತ ಪುಸ್ತಕಗಳು:-

ಕಾವ್ಯ:-

  1. ಮುಗುಳು-1958
  2. ಹೇಳತೇನ ಕೇಳ-1964
  3. ತಕರಾರಿನವರು-1971

(ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೃತಿ)

  1. ಸಾವಿರದ ನೆರಳು-1979(ಆಶನ್ ಅವಾರ್ಡ್-1982-ಕೇರಳ)
  2. ಆಯ್ದ ಕವನಗಳು-1989
  3. ಬೆಳ್ಳಿ ಮೀನು-1989
  4. ಅಕ್ಕಕ್ಕು ಹಾಡುಗಳೆ-1993
  5. ಈವರೆಗಿನ ಹೇಳತೇನ ಕೇಳ-1993
  6. ಚಕೋರಿ (ಮಹಾಕಾವ್ಯ)-1996

ನಾಟಕಗಳು

  1. ಬೆಂಬೆತ್ತಿದ ಕಣ್ಣು-1961
  2. ನಾರ್ಸಿಸಸ್-1969
  3. ಋಷ್ಯಶೃಂಗ(ಚಲನಚಿತ್ರವಾಗಿದೆ)-1970
  4. ಜೋಕುಮಾರ ಸ್ವಾಮಿ-1972

 

ಈ ಕೃತಿಗೆ ಭಾರತದಲ್ಲಿ 1975ನೇ ವರ್ಷದ ಅತ್ಯುತ್ತಮ ನಾಟಕವೆಂದ  ಆಯ್ಕೆಯಾಗಿ ಶ್ರೀಮತಿ ಕಮಲಾದೇವಿ ಚಟ್ಟೋಪಾದ್ಯಾಯ’ ಪ್ರಶಸ್ತಿ, ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿರುತ್ತದೆ.

  1. ಚಾಳೀಸು-1973
  2. ಸಂಗ್ಯಾಬಾಳ್ಯ ಅನಬೇಕೊ ನಾಡೊಳಗ-1975
  3. ಕಿಟ್ಟಿಯ ಕಥೆ-1974
  4. ಜೈಸಿದನಾಯಯಕ-1975

(ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕದಲ್ಲಿ ವರ್ಷದ ಅತ್ಯುತ್ತಮ ಪುಸ್ತಕವೆಂಬ ಕಾರಣಕ್ಕೆ ವರ್ಧಮಾನ ಪ್ರಶಸ್ತಿಯೂ ಈ ಕೃತಿಗೆ ಲಭಿಸಿದೆ)

  1. ಆಲಿಬಾಬಾ (ಅನುವಾದಗೊಂಡು ಭಾರತೀಯ ಸಾಹಿತ್ಯದಲ್ಲಿ ಪ್ರಕಟಿತಗೊಂಡಿದೆ, ಸಾಹಿತ್ಯ ಅಕಾಡೆಮಿ-1980)
  2. ಕಾಡುಕುದುರೆ (ಚಲನಚಿತ್ರವಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ)-1976
  3. ನಾಯಿಕಥೆ (ಸಂಗೀತ ಎನ್ನುವ ಹೆಸರಿನ ಚಲನಚಿತ್ರವಾಗಿದೆ ಮತ್ತು ಐದು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ೦-1976
  4. ಖಾರೋಖಾರ-1977
  5. ಮತಾಂತರ-1978
  6. ಹರಕೆಯ ಕುರಿ(ಚಲನಚಿತ್ರವಾಗಿ ರಾಷ್ಟ್ರಿಯ ಪ್ರಶಸ್ತಿಯನ್ನು ಪಡೆದುಕೊಂಡಿದೆ)-1983
  7. ಕಂಬಾರ ಅವರ ನಾಟಕಗಳು-1984
  8. ಸಾಂಬಶಿನ ಪ್ರಹಸನ-1987
  9. ಸಿರಿಸಂಪಿಗೆ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ)-1991
  10. ಹುಲಿಯ ನೆರಳು(ಚಲನಚಿತ್ರವಾಗಿದೆ)-1980
  11. ಬೋಳೆಶಂಕರ-1991
  12. ಪುಷ್ಪರಾಣಿ-1990
  13. ತಿರುಕನ ಕನಸು-1989
  14. ಮಹಾಮಾಹಿ-1999

 

ಕಾದಂಬರಿಗಳು ಮತ್ತು ಕಥೆಗಳು:-

  1.  ಅಣ್ಣತಂಗಿ-1956
  2. ಕರಿಮಾಹಿ(ಚಲನಚಿತ್ರವಾಗಿದೆ)-1975
  3. ಜಿ.ಕೆ. ಮಾಸ್ತರರ ಪ್ರಣಯ ಪ್ರಸಂಗ-1986

(ದೂರದರ್ಶನಕ್ಕಾಗಿ ಚಿತ್ರೀಕರಸಿಲಾಗಿದೆ)

  1. ಸಿಂಗಾರೆವ್ವ ಮತ್ತು ಅರಮನೆ

(ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1982) -1982

ಸಂಶೋಧನೆ:

  1. ಉತ್ತರ ಕರ್ನಾಟಕದ ಜಾನಪದ ರಂಗಭೂಮಿ-1965
  2. ಸಂಗ್ಯಾಬಾಳ್ಯ-1966
  3. ಬಣ್ಣಿಸಿ ಹಾಡವ್ವ ನನ ಬಳಗ-1966
  4. ಬಯಲಾಟಗಳು-1973
  5. ಮಾತಾಡೊ ಲಿಂಗವೆ-1973
  6. ನಮ್ಮ ಜಾನಪದ-1973
  7. ಬಂದಿರೆ ನನ್ನ ಜಡೆಯೊಳಗೆ-1981
  8. ಕನ್ನಡ ಜಾನಪದ ವಿಶ್ವಕೋಶ
  9. ಬೇಡರ ಹುಡುಗ  ಮತ್ತು ಗಿಳಿ

(ಎರಡು ಸಂಪುಟಗಳು)-1985

  1. ಲಕ್ಷಾಪತಿ ರಾಜನ ಕಥೆ-1986
  2. ಕಾಸಿಗೊಂದು ಸೇರು-1989
  3. ನೆಲದ ಮರೆಯ ನಿಧಾನ-1993
  4. ಬೃಹದ್ದೇಶಿಯ ಚಿಮತನ-2001
  5. ರಾಷ್ಟ್ರೀಯ ನಾಟಕ ಶಾಲೆಗಾಗಿ ಆಧುನಿಕ

ನಾಟಕಗಳ ಒಂದು ಸಂಕಲನ-2000